ಸುಮಾರು, 1990 ರಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಗಮನಕೊಟ್ಟಿರುವ ಶ್ರೀ ಆಂಜನಪ್ಪ ಮತ್ತು ಶೋಭಾ ಆಂಜನಪ್ಪ ನವರು ಶ್ರೀ R ಅಶೋಕ್ ರವರ ಸಾರಥ್ಯದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಬಹಳ. ಅವುಗಳಲ್ಲಿ ಪ್ರಮುಖವಾದ ಅಭಿವೃದ್ಧಿ ಕೆಲಸಗಳು ಮತ್ತು ಅದಕ್ಕೆ ಸಂಬಂಧಪಟ್ಟ ಚಿತ್ರಗಳನ್ನುಈ ಪುಟದಲ್ಲಿ ನಮೂದಿಸಲಾಗಿದೆ.

  • Covid-19 ನ ಸಂದರ್ಭದಲ್ಲಿ, ತಮ್ಮ ಕ್ಷೇತ್ರವಲ್ಲದೆ ಚನ್ನಪಟ್ಟಣದ ವಾದ್ಯಗೋಷ್ಠಿ ಕಲಾವಿದರು ಮತ್ತು ಕನಕಪುರದ ಸರ್ಕಾರಿ ಶಾಲೆಯ ಮಕ್ಕಳ ಕಷ್ಟಕ್ಕೆ ಸ್ಪಂದಿಸಿದ್ದು, ಶ್ರೀ ಆಂಜನಪ್ಪನವರ ಮಾನವೀಯತೆಗೆ ಹಿಡಿದ ಸಾಕ್ಷಿ.

  • ಪದ್ಮನಾಭನಗರ ಫ್ಲೈ ಓವರ್ ಹತ್ತಿರ ಅಕ್ರಮವಾಗಿ ಹೊತ್ತುವರಿಯಾಗಿದ್ದ BBMP ಯ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನ ಯ ಬಗ್ಗೆ ಶ್ರೀ R ಅಶೋಕ್ ರ ಗಮನಕ್ಕೆ ತಂದಾಗ ಅವರು ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಆ ಅಸ್ಥಿಯನ್ನ ಕಾನೂನಾತ್ಮಕವಾಗಿ ಬಿಬಿಎಂಪಿ ಹಸ್ತಾಂತರ ಮಾಡುತ್ತಾರೆ. ಪ್ರಸ್ತುತ ಆ ಸ್ಥಳದಲ್ಲಿಪದ್ಮನಾಭನಗರದ ಸಾರ್ವಜನಿಕರಿಗಾಗಿ ಉದ್ಯಾನವನವನ್ನು ನಿರ್ಮಿಸಲಾಗುತಿದ್ದು ಹಾಗು ಆ ಉದ್ಯಾನವನಕ್ಕೆ ಇತ್ತೀಚಿಗೆ ಹೆಲಿಕಾಪ್ಟಾರ್ನಲ್ಲಿ ಮಡಿದ CDS General "Bipin Rawat" ಹೆಸರಿಡಲು ನಿರ್ಧರಿಸಲಾಗಿದೆ.

  • BBMP ವಾರ್ಡಿಗೆ ಸೇರಿದೆ ಗೋವಿನಾಯಕನಹಳ್ಳಿಯಲ್ಲಿ ಪಂಡಿತ್ ದೀನ ದಯಾಳ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ಅದರಲ್ಲಿಮಕ್ಕಳಿಗಾಗಿ ಬಾಸ್ಕೆಟ್ ಬಾಲ್ ಕ್ರೀಡಾಂಗಣ, ಸಾರ್ವಜನಿಕರಿಗಾಗಿ ಒಳಾಂಗಣ ಕ್ರೀಡಾಂಗಣ ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.

  • BBMP ವಾರ್ಡಿಗೆ ಸೇರಿದೆ ಗೋವಿನಾಯಕನಹಳ್ಳಿ ಯಲ್ಲಿ ಪೇಜಾವರಶ್ರೀ ಉದ್ಯಾನವನ ನಿರ್ಮಿಸಲಾಗಿದ್ದು, ಅದರಲ್ಲಿ ಮಕ್ಕಳಿಗಾಗಿ ಕ್ರೀಡಾಂಗಣ ಮತ್ತು ಸಾರ್ವಜನಿಕರು ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.

  • BBMP ವಾರ್ಡಿಗೆ ಸೇರಿದೆ K S R T C layout ಯಲ್ಲಿ ಉದ್ಯಾನವನ ನಿರ್ಮಿಸಲಾಗಿದ್ದು, ಅದರಲ್ಲಿ ಮಕ್ಕಳಿಗಾಗಿ ಕ್ರೀಡಾಂಗಣ ಮತ್ತು ಸಾರ್ವಜನಿಕರು ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.

  • BBMP ವಾರ್ಡಿಗೆ ಸೇರಿದೆ ಗೌಡನಪಾಳ್ಯದ ಕೆರೆ ಅಭಿವೃದ್ಧಿ: ಗೌಡನಪಾಳ್ಯದ ಕೆರೆಯನ್ನು ಅಭಿವೃದ್ಧಿಗೊಳಿಸುವ ಕೆಲಸ ಪ್ರಗತಿಯಲ್ಲಿದ್ದು, ಪ್ರಸ್ತುತ ಡ್ರೈನೇಜ್ ತೆರವುಗೊಳಿಸಿ ಮಳೆನೀರು ಸಂಗ್ರಹಿಸುವುದರ ಮೂಲಕ ಸುತ್ತಮುತ್ತಲೂ ಅಂತರ್ಜಾಲದ ಮಟ್ಟವನ್ನು ಸುಧಾರಿಸುವ ಕೆಲಸ - ಕಾರ್ಯಗಳು ನಡೆಯುತ್ತಿವೆ.

  • B H S layout ಉದ್ಯಾನವನ ಮತ್ತು ವ್ಯಾಯಾಮ ಶಾಲೆ: BTS ಲೇಔಟ್ ನಲ್ಲಿ ಸುಸಜ್ಜಿತ ಲೈಬ್ರರಿ, ಮಕ್ಕಳಿಗಾಗಿ ಬಾಸ್ಕೆಟ್ ಬಾಲ್ ಕ್ರೀಡಾಂಗಣ , ಸಾರ್ವಜನಿಕರಿಗಾಗಿ ಒಳಾಂಗಣ ಕ್ರೀಡಾಂಗಣ ಹಾಗು ಹಿರಿಯ ನಾಗರೀಕರಿಗಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ.

  • ವಾರ್ಡಿನ ಹಿರಿಯ ನಾಗರೀಕರಿಗಾಗಿ ಪ್ರತಿ ವರ್ಷ ಪ್ರವಾಸದ ವ್ಯವಸ್ಥೆ ಮಾಡಲಾಗುತ್ತಿದೆ.

  • ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಉಚಿತ ಪಠ್ಯ-ಪುಸ್ತಕ ಮತ್ತು ಸಮವಸ್ತ್ರ ವಿತರಣೆ.

  • ಪದ್ಮನಾಭನಗರದ ಪಾರ್ಕ್ ಗಳಲ್ಲಿ ಪ್ರಮುಖವಾದ, ಲಕ್ಷ್ಮೀನಾರಾಯಣ ಉದ್ಯಾನವನ, R K ಲೇಔಟ್ ಮೊದಲ ಹಂತದ ಉದ್ಯಾನವನ ಹಾಗು ಎರಡನೇ ಹಂತದ ಉದ್ಯಾನವನ, ಟೆಲಿಕಾಂ ಲೇಔಟ್ ನ ಉದ್ಯಾನವನ ಮತ್ತು BHS ಲೇಔಟ್ 7ನೇ ಕ್ರಾಸ್ ಉದ್ಯಾನವನ ಹಾಗು 6ನೇ ಕ್ರಾಸ್ ಉದ್ಯಾನವನಗಳನ್ನು ಮೇಲ್ದರ್ಜೆಗೆ ಅಭಿವೃದ್ಧಿಪಡಿಸಾಲಾಗಿದೆ.

  • ದೊಡ್ಡಗೌಡನ ಪಾಳ್ಯದ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಲ್ಲನ್ನಾಗಿ ಮೇಲ್ದರ್ಜೆಗೆ ಏರಿಸಿರುವುದಲ್ಲದೆ, ಉತ್ತಮ ಸ್ಯಾನಿಟರಿ ವ್ಯವಸ್ಥೆಯನ್ನು ಒದಗಿಸಲಾಗಿದೆ.

  • ಪದ್ಮನಾಭನಗರದ ಸಾರ್ವಜನಿಕರಿಗಾಗಿ ಸುಮಾರು 7 "ಶುದ್ಧ ಕುಡಿಯುವ ನೀರಿನ ಘಟಕ" ಗಳನ್ನು ನಿರ್ಮಿಸಲಾಗಿದೆ. ಇವು ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದೆ.

  • Covid-19 ರ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ತೊಂದರೆಗೆ ಒಳಗೊಂಡವರನ್ನು ಗುರುತಿಸಿ ಅವರಿಗೆ ಆರೋಗ್ಯಕರವಾದ ದಿನಸಿ ಕಿಟ್, ಮಾಸ್ಕ್, ಮೆಡಿಕಲ್ ಕಿಟ್ ಮತ್ತು ಸಾನಿಟರ್ಗಳನ್ನು ಒದಗಿಸಲಾಗಿದೆ.

  • Covid-19 ರ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕೋವಿಡ್ ನ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಮತ್ತು ಎಲ್ಲರಿಗೂ Covid-19 ವ್ಯಾಕ್ಸೀನ್ ಎಟುಕುವ ವ್ಯವಸ್ಥೆ ಮಾಡುವ ಮೂಲಕ ವಾರ್ಡಿನಲ್ಲಿ ಸಂಭವಿಸಬಹುದಾಗಿದ್ದ ಸಾವು-ನೋವುಗಳ ಸಂಖ್ಯೆಯನ್ನು ಕಡಿತಗೊಳಿಸಲು ಹೆಚ್ಚಿನ ಶ್ರಮವನ್ನು ವಹಿಸಲಾಗಿದೆ.

  • ಪ್ರಸ್ತುತ, ಪದ್ಮನಾಭನಗರ ವಾರ್ಡಿನ ಪಕ್ಕದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ಒಂದೇ ಸೂರಿನಲ್ಲಿ ಈ ಕೆಳಗೆ ತಿಳಿಸಿರುವ ಕಛೇರಿಗಳನ್ನು ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.

1. ಪೋಸ್ಟ್ ಆಫೀಸ್

2. ಲೈಬ್ರರಿ

3. ಹೊಲಿಗೆ ಯಂತ್ರ ತರಬೇತಿ ಕೇಂದ್ರ

4. BBMP ಕಂದಾಯ ಆಫೀಸ್

5. ಬೆಂಗಳೂರು - ಒನ್

  • ಪ್ರತಿವರ್ಷ, ವಾರ್ಡನ ಮಹಿಳೆಯರ ಕಲೆಗಳನ್ನು ಪ್ರೋತ್ಸಹಿಸುವ ಸಲುವಾಗಿ, ಈ ಕೆಳಗೆ ತಿಳಿಸಿರುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

1. ರಂಗೋಲಿ ಸ್ಪರ್ಧೆ

2. ಸ್ಪೋರ್ಟ್ಸ್

  • ವಾರ್ಡಿನಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ವಾರ್ಡಿನ ಸಾರ್ವಜನಿಕರಿಗೆ ರಾಷ್ಟ್ರದ ಜನರ ಕನಸಾದ "ರಾಮ ಮಂದಿರ" ನಿರ್ಮಾಣದ ಪ್ರಾಮುಖ್ಯತೆಯ ಅರಿವನ್ನು ಮೂಡಿಸುವ ಮೂಲಕ "ರಾಮ ಮಂದಿರ" ನಿರ್ಮಾಣ ಮಾಡಲು ವಾರ್ಡಿನ ಎಲ್ಲ ಜನರಿಂದ ಹೆಚ್ಚಿನ ದೇಣಿಗೆಯನ್ನು ಸಂಗ್ರಹಿಸಿ ಕಳುಹಿಸಿ ಕೊಡಲಾಗಿದೆ.

  • ವಾರ್ಡಿನ ಯುವಕರು ಸ್ವಾವಲಂಬಿಗಳಾಗಬೇಕೆಂಬ ಹಿತದೃಷ್ಟಿಯಿಂದ "ಉದ್ಯೋಗ ಮೇಳ" ದಂತಹ ಕಾರ್ಯಕ್ರಮಗಳ್ಳನ್ನು ನಡೆಸಲಾಗಿದ್ದು, ಅದರಲ್ಲಿ ಸುಮಾರು 100 ಪ್ರತಿಷ್ಠಿತ ಕಂಪನಿಗಳು ಹಾಗು 4000 ಸಾವಿರ ಯುವಕರು ಭಾಗವಹಿಸಿದ್ದು, ಅವರಲ್ಲಿ ಸುಮಾರು 500 ಯುವಕರಿಗೆ ಉದ್ಯೋಗ ಸಿಕ್ಕಿರುತ್ತದೆ.

  • ಪ್ರಮುಖ ಹಬ್ಬವಾದ ಸಂಕ್ರಾಂತಿಯಂದು ಜಾನಪದ ಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯ ಮಂತ್ರಿಗಳಾದ, ಶ್ರೀ ಯಡಿಯೂರಪ್ಪ, ಮಂತ್ರಿಗಳಾದ ಶ್ರೀ ಆರ್ ಅಶೋಕ್, ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಮತ್ತು ಇತರ ಗಣ್ಯರು ಭಾಗವಸಿರುತ್ತಾರೆ. ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ, ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ಕೊಟ್ಟಿರುತ್ತವೆ.

  • ವಾರ್ಡನಲ್ಲಿ ನಿರಂತರವಾಗಿ ಕಾಡುತ್ತಿರುವ, ಕಸದ ಸಮಸ್ಯೆಯನ್ನು ಹೋಗಲಾಡಿಸಲು, ಹೆಚ್ಚಿನ ಮಹತ್ವವನ್ನು ನೀಡಿರುವುದಲ್ಲದೆ, ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಶ್ರಮವಹಿಸಲಾಗುತ್ತಿದೆ.

  • BBMP ವಾರ್ಡಿಗೆ ಸೇರಿದೆ ಗೋವಿನಾಯಕನಹಳ್ಳಿಯಲ್ಲಿ ಪಂಡಿತ್ ದೀನ ದಯಾಳ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗಾಗಿ ಸಂಕ್ರಾಂತಿ ಜಾತ್ರೆಯನ್ನು ಆಚರಿಸಲಾಗಿದ್ದು, ಆ ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರಿಂದ ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

  • ಬಡಾವಣೆಯ ಯುವಕರಿಗಾಗಿ B H S ಲೇಔಟ್ ನಲ್ಲಿ ಆಟದ ಮೈದಾನ ನಿರ್ಮಿಸಲು ಬಿಬಿಎಂಪಿ ವತಿಯಿಂದ ಅನುಮೋದನೆ ಪಡೆದಿದ್ದು, ಸದ್ಯದಲ್ಲಿಯೇ ಕೆಲಸ ಶುರುವಾಗಲಿದೆ.

  • ಪದ್ಮನಾಭನಗರದ ಶ್ರೀ ವಾಜಪೇಯಿ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಸಹ ಪ್ರಗತಿಯಲ್ಲಿದೆ.